ಮಡಿಕೇರಿ, ಮಾ. 1: ಕೊಡವ ಬುಡಕಟ್ಟು ಕುಲಶಾಸ್ತ್ರ ಅಧ್ಯಯನವನ್ನು ಪುನರಾರಂಭಿಸಬೇಕು ಹಾಗೂ ಬಂದೂಕು ವಿನಾಯಿತಿ ಪತ್ರ ನೀಡಲು ಜಿಲ್ಲಾಡಳಿತ ತಗಾದೆ ಮುಂದುವರಿಸಿರುವದನ್ನು ಖಂಡಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಯಿತು.

ಕೇಂದ್ರ ಸರಕಾರದಿಂದ ಅನುಮೋದನೆ ಸಿಕ್ಕಿದ್ದರೂ ಕುಲಶಾಸ್ತ್ರ ಅಧ್ಯಯನ ಮಾಡಲು ರಾಜ್ಯ ಸರಕಾರ ಹಿಂದೇಟು ಹಾಕುತ್ತಿದೆ. ಬಂದೂಕು ವಿನಾಯಿತಿ ಪತ್ರ ನೀಡಲು ಜಿಲ್ಲಾಡಳಿತ ವಿನಾಕಾರಣ ತಗಾದೆ ತೆಗೆಯುತ್ತಿದೆ. ಇದನ್ನು ಸರಿಪಡಿಸಿ ಕುಲಶಾಸ್ತ್ರ ಅಧ್ಯಯನ ಪುನರಾರಂಭಿಸಬೇಕು ಹಾಗೂ ಬಂದೂಕು ವಿನಾಯಿತಿ ಪತ್ರ ನೀಡಲೇಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಸಂಬಂಧ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಯಿತು.

ಎನ್.ಯು ನಾಚಪ್ಪ ಕೊಡವ ನೇತೃತ್ವದ ಕಾರ್ಯಕ್ರಮದಲ್ಲಿ ಪುಳ್ಳಂಗಡ ನಟೇಶ್, ಬೊಪ್ಪಂಡ ಬೊಳ್ಳಮ್ಮ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶರೀನ್, ಅರೆಯಡ ಗಿರೀಶ್, ಚಂಬಂಡ ಜನತ್, ಬಲ್ಲಚಂಡ ಟಿಟ್ಟು, ಕಾಟುಮಣಿಯಂಡ ಉಮೇಶ್, ಪುಲ್ಲೆರ ಕಾಳಪ್ಪ, ಮೂಕೊಂಡ ದಿಲೀಪ್, ನಂದಿನೆರವಂಡ ವಿಜು, ಕಾಂಡೆರ ಸುರೇಶ್, ಕೇಟೋಳಿರ ಅಪ್ಪಚ್ಚು, ಚೋಳಪಂಡ ವಿಜಯ, ಬಲ್ಲಣಮಾಡ ರಾಜ, ಪುಲ್ಲೆರ ಸುನು ಸುಬ್ಬಯ್ಯ, ಕಲಿಯಂಡ ಮೀನ, ಕಲಿಯಂಡ ಪ್ರಕಾಶ್, ಮಣವಟ್ಟಿರ ನಂದ ಮುಂತಾದವರು ಭಾಗವಹಿಸಿದ್ದರು.