ವೀರಾಜಪೇಟೆ, ಮಾ. 1: ಸರಕಾರದ ಆದೇಶದನ್ವಯ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗುವದು. ಈ ಸೌಲಭ್ಯವನ್ನು ಜನರು ಸದುಪಯೋಗ ಪಡಿಸಿಕೊಳ್ಳುವಂತೆ ಆಹಾರ ನಿರೀಕ್ಷಕ ಶಿವನಂಜಯ್ಯ ತಿಳಿಸಿದರು.
ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ನಿಗದಿತ ದಿನಾಂಕದಂದು ಫಲಾನುಭವಿಗಳು ಕುಟುಂಬದ ಸದಸ್ಯರ ಪೈಕಿ ಯಾರಾದರೊಬ್ಬರು ಆದಾಯ ದೃಢೀಕರಣ ಪತ್ರದೊಂದಿಗೆ ಅರ್ಜಿಯಲ್ಲಿರುವ ಸದಸ್ಯರು ಹಾಜರಾಗಿ ಪಡಿತರ ಚೀಟಿಯನ್ನು ಪಡೆದುಕೊಳ್ಳುವಂತೆ ತಿಳಿಸಿದರಲ್ಲದೆ. ಈಗಾಗಲೇ ತಾಲೂಕು ಕಚೇರಿಯಲ್ಲಿಯು ವಿತರಿಸಲಾಗುತ್ತಿದೆ ಎಂದರು.
ತಾ. 2 ರಂದು (ಇಂದು) ಬೆಳಿಗ್ಗೆ 10 ರಿಂದ 1.30 ಬೇಟೋಳಿ ಮತ್ತು ಕಾನೂರು. ಮಧ್ಯಾಹ್ನ 2.30 ರಿಂದ ಸಂಜೆ 5 ರವರೆಗೆ ಆರ್ಜಿ ಮತ್ತು ನಾಲ್ಕೇರಿ ಗ್ರಾ.ಪಂ. ತಾ. 3 ಬೆಳಿಗ್ಗೆ 10 ರಿಂದ 1.30 ಬಿಟ್ಟಂಗಾಲ ಮತ್ತು ಟಿ.ಶೆಟ್ಟಿಗೇರಿ ಗ್ರಾ.ಪಂ. ಮಧ್ಯಾಹ್ನ 2.30 ಬಿ. ಶೆಟ್ಟಿಗೇರಿ ಮತ್ತು ಶ್ರೀಮಂಗಲ. ತಾ. 5 ಬೆಳಿಗ್ಗೆ 10 ರಿಂದ 1.30 ಕುಟ್ಟ 2.30 ಕ್ಕೆ ಕೆ. ಬಾಡಗ ಗ್ರಾ.ಪಂ. ತಾ. 6 ರಂದು ಬೆಳಿಗ್ಗೆ 10 ರಿಂದ 1.30 ಕೆದಮುಳ್ಳೂರು ಮತ್ತು ಹುದಿಕೇರಿ. ಮಧ್ಯಾಹ್ನ 2.30 ರಿಂದ 5.30 ಚಂಬೆಬೆಳ್ಳೂರು ಮತ್ತು ಬಿರುನಾಣಿ ಗ್ರಾ.ಪಂ. ತಾ. 7 ರಂದು ಬೆಳಿಗ್ಗೆ 10 ಗಂಟೆಯಿಂದ 1.30 ಬಲ್ಯಮಂಡೂರು ಗ್ರಾ.ಪಂ. ತಾ. 8 ರಂದು 10 ಗಂಟೆಗೆ ಮಾಯಮುಡಿ ಗ್ರಾಮ ಪಂಚಾಯಿತಿಗಳಲ್ಲಿ ಪಡಿತರ ಚೀಟಿ ವಿತರಿಸಲಾಗುವದು ಎಂದು ಆಹಾರ ನಿರೀಕ್ಷಕ ಚಂದ್ರನಾಯಕ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ. 7349615953 ಹಾಗೂ 9480853637 ನ್ನು ಸಂಪರ್ಕಿಸಬಹುದು.