ಮಡಿಕೇರಿ, ಮಾ.1 : ಪೊನ್ನಂಪೇಟೆಯ ಸಾಯಿ ಶಂಕರ ಶಿಕ್ಷಣ ಸಂಸ್ಥೆಯಲ್ಲಿ ತಾ. 3 ರಂದು “ಜೀóಲ್-2018” ಫೆಸ್ಟ್‍ನ್ನು ಆಚರಿಸಲಾಗುತ್ತಿದ್ದು, ವಿಭಿನ್ನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದು ಕಾಲೇಜಿನ ಉಪ ಪ್ರಾಂಶುಪಾಲರಾದ ಡಿ.ವಿ.ದಶಮಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಗ್ಗೆ 9 ಗಂಟೆಗೆ ಶಿಕ್ಷಣ ಸಂಸ್ಥೆಯ ಆಟದ ಮೈದಾನದಲ್ಲಿ ನಡೆಯುವ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳÀ ಕುರಿತು ಮಾಹಿತಿ ನೀಡಿದರು.

ಪುಟ್ಬಾಲ್, ಥ್ರೋಬಾಲ್, ಟ್ರಷರ್ ಹಂಟ್, ರಂಗೋಲಿ, ಮೆಹೆಂದಿ, ವಾಲಗ ಕುಣಿತ, ಸೌಂದರ್ಯ ನಡಿಗೆ, ಕೇಶಾಲಂಕರ, ಆಟೋ ಶೋ, ಆಹಾರ ಮೇಳ ಸ್ಪರ್ಧೆಗಳು ನಡೆಯಲಿವೆ. ಅಂದು ರಾತ್ರಿ ಸಭಾ ಕಾರ್ಯಕ್ರಮದ ನಂತರ ಮೈಸೂರಿನ ಫ್ರೆಡ್ಡಿ ಮೋಸಸ್ ತಂಡದಿಂದ ಡಿಜೆ ನೈಟ್ಸ್ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ.

ಮಂಗಳೂರು ಹಾಗೂ ಮೈಸೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವೃತ್ತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ 20 ಕಾಲೇಜುಗಳಿಗೆ ಆಹ್ವಾನವನ್ನು ನೀಡಲಾಗಿದ್ದು, 8 ಕಾಲೇಜುಗಳು ನೋಂದಾಯಿಸಿ ಕೊಂಡಿವೆ.

ಸಂಜೆ 6 ಗಂಟೆಗೆ ಸಂಸ್ಥೆ ಅಧ್ಯಕ್ಷ ಕೋಳೇರ ಝರುಗಣಪತಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಬಿ.ಜೆ.ಪಿ ಪ್ರಮುಖ ಬಿ.ಪಿ. ಮಂಜುನಾಥ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅರುಣ್ ಮಾಚಯ್ಯ ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಗೌರವ್ ಕಾರ್ಯಪ್ಪ, ನಿದೇರ್ಶಕರಾದ ಗ್ರೀಟಾ ಅಪ್ಪಣ್ಣ, ದೈಹಿಕ ಶಿಕ್ಷಕÀ ಎಂ.ಎನ್.ಚಿಟ್ಯಪ್ಪ, ಹಾಗೂ ಉಪನ್ಯಾಸಕಿ ನೀಮಾ ಸೋಮಣ್ಣ ಉಪಸ್ಥಿತರಿದ್ದರು.