ಕುಶಾಲನಗರ, ಮಾ. 1: ತಾ. 3 ರಂದು ಕುಶಾಲನಗರದಿಂದ ಮಂಗಳೂರಿಗೆ ಸುರಕ್ಷಾ ಯಾತ್ರೆ ಕೈಗೊಳ್ಳಲಾಗಿದೆ ಎಂದು ಯಾತ್ರೆಯ ಸಂಚಾಲಕರಾದ ಜಿ.ಎಲ್.ನಾಗರಾಜ್ ಹೇಳಿದರು.

ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಫ್‍ಐ ಮತ್ತು ಎಸ್‍ಡಿಪಿಐ ಅನ್ನು ನಿಷೇದಿಸುವದು. ರಾಜ್ಯದಲ್ಲಿ ಹಿಂದೂಗಳ ಮೇಲಾಗಿರುವ ಅನೇಕ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳನ್ನು ಸಿಬಿಐ ಮೂಲಕ ತನಿಖೆ ನಡೆಸುವದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ತಾ. 3 ರಿಂದ 6 ರವರೆಗೆ ಮಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವ ಸದಾನಂದಗೌಡ ಅವರು ಕುಶಾಲನಗರದಲ್ಲಿ ಮಂಗಳೂರು ಚಲೋಗೆ ಚಾಲನೆ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕುಶಾಲನಗರ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ಜಿಲ್ಲಾ ಹಿಂದೂ ಜಾಗರಣಾ ಸಮಿತಿ ಸಂಚಾಲಕ ಮಂಜುನಾಥ್, ತಾಲ್ಲೂಕು ಸಂಚಾಲಕ ಮಧು, ವಿಶ್ವ ಹಿಂದೂಪರಿಷತ್ ತಾಲೂಕು ಸಂಚಾಲಕ ಸಂತೋಷ್, ಭಜರಂಗದಳ ತಾಲೂಕು ಸಂಚಾಲಕ ರಾಜೀವ್, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮುಖಂಡ ನವನೀತ್, ನಗರ ಬಿಜೆಪಿ ಯುವ ಮೋರ್ಚ ಕಾರ್ಯದರ್ಶಿ ದಿನೇಶ್ ನಿಡ್ಯಮಲೆ, ಜನ ಸುರಕ್ಷಾ ಯಾತ್ರೆಯ ಉಪಸಂಚಾಲಕ ಪಿ.ಪಿ.ಸತ್ಯನಾರಾಯಣ, ತಾಲೂಕು ಯುವ ಮೋರ್ಚದ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಇದ್ದರು.