ಮಡಿಕೇರಿ, ಫೆ. 6: ನಗರದ ದೇಚೂರು ನಿವಾಸಿ ನಾಣಯ್ಯ ಎಂಬವರ ಮೇಲೆ ಅವರ ಮಗಳ ಗಂಡ ಕ್ಷುಲ್ಲಕ ಕಾರಣಕ್ಕಾಗಿ ಥಳಿಸಿದ ಕುರಿತು ದೊರೆತ ಪುಕಾರಿನ ಮೇರೆಗೆ ಪೊಲೀಸರು ಅಳಿಯನನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿದ್ದಾರೆ. ಸಾಂಸಾರಿಕ ಕಲಹ ಹಿನ್ನೆಲೆ ಚಿಕ್ಕಮುಂಡೂರು ನಿವಾಸಿ ರ್ಯಾಲಿ ಕಾರ್ಯಪ್ಪ ಮಾವ ನಾಣಯ್ಯ ಮನೆಗೆ ಬಂದು ಥಳಿಸಿ ಪರಾರಿಯಾಗಿದ್ದ ಸಂಬಂಧ ಗಾಯಾಳು ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಬೆಂಗಳೂರಿನಲ್ಲಿ ತಂಗಿದ್ದ ಬಗ್ಗೆ ಖಚಿತಪಡಿಸಿಕೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾಗಿ ಪೊಲೀಸ್ ವೃತ್ತ ನಿರೀಕ್ಷಕ ಮೇದಪ್ಪ ಖಚಿತಪಡಿಸಿದ್ದಾರೆ.