ಮಡಿಕೇರಿ ಮಹದೇವಪೇಟೆ ನಿವಾಸಿ, ಇಂಡಿಯನ್ ಗ್ಯಾಸ್ ಏಜೆನ್ಸಿ ನೌಕರ ಎಂ.ಯು. ಉಸ್ಮಾನ್ (72) ಅವರು ತಾ. 6 ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರರು, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 7 ರಂದು (ಇಂದು) ಈದ್ಗಾ ಮೈದಾನದಲ್ಲಿ ನಡೆಯಲಿದೆ.

ಟಬೊಳ್ಳುಮಾಡು ನಿವಾಸಿ ದಿ. ಚಂಗುಲಂಡ ಬೋಪಯ್ಯ ಅವರ ಪುತ್ರ ಸಾಬು ತಿಮ್ಮಯ್ಯ (64) ಅವರು ತಾ. 5 ರಂದು ನಿಧನರಾದರು. ಅಂತ್ಯಕ್ರಿಯೆ ನೆರವೇರಿತು. ಮೃತರು ಪತ್ನಿ, ಓರ್ವ ಪುತ್ರ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.