ಸುಂಟಿಕೊಪ್ಪ, ಜ. 30: ಇಲ್ಲಿನ ಜಿಯಂಪಿ ಶಾಲಾ ಮೈದಾನದಲ್ಲಿ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿದ್ದ ಯುವಕನಿಗೆ ಮೈದಾನದಲ್ಲಿದ್ದ ಯುವಕರು ಹಲ್ಲೆ ಮಾಡಿದ ಘಟನೆ ಭಾನುವಾರ ನಡೆದಿದೆ.

ಇಲ್ಲಿನ ಮೈದಾನದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯವನ್ನು ವೀಕ್ಷಿಸಲು ಸಮೀಪದ ಭೂತನಕಾಡು ವಿನ ಟಾಟಾ ಎಸ್ಟೇಟಿನ ಜಿ.ಎ.ಪ್ರವೀಣ್ ಮತ್ತು ಆತನ ಸ್ನೇಹಿತ ಬಂದಿದ್ದರು. ಇದೇ ವೇಳೆ ಇಲ್ಲಿನ ಗದ್ದೆಹಳ್ಳದ ನಿವಾಸಿಗಳಾದ ನೌಷದ್, ಜಾಹಿದ್, ರಶೀದ್ ಎಂಬ ಮೂವರು ಪ್ರವೀಣನ ಬಳಿ ಬಂದು ಭೂತನಕಾಡು ವಿನಲ್ಲಿ ಈಚೆಗೆ ಅಪಘಾತವಾದ ಬಗ್ಗೆ ಪೊಲೀಸರಿಗೆ ಮಾಹಿತಿ ಯಾಕೆ ನೀಡಿದ್ದೀಯಾ ಎಂದು ಹೇಳಿ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಪ್ರವೀಣ್ ನೀಡಿದ ದೂರಿ ನನ್ವಯ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.