ಮಡಿಕೇರಿ, ಜ. 31: 19ನೇ ವರ್ಷದ ಕೊಡವ ಕ್ರಿಕೆಟ್ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆದ ಮಡ್ಲಂಡ ಕ್ರಿಕೆಟ್ ಕ್ವಿಜ್ ಸ್ಪರ್ಧೆಯಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದುಕೊಂಡಿಡೆ.
ನಗರದ ಎಫ್ಎಂಸಿ ಕಾಲೇಜು ಸಭಾಂಗಣದಲ್ಲಿ ನಡೆದ ಕ್ರಿಕೆಟ್ ಕ್ವಿಜ್ ಸ್ಪರ್ಧೆಯಲ್ಲಿ ನಾಪೆÇೀಕ್ಲುವಿನ ರಾಮಟ್ರಸ್ಟ್ ತಂಡ ದ್ವಿತೀಯ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ತಂಡ ತೃತೀಯ ಸ್ಥಾನ ಗಳಿಸಿದೆ.
ಕಳೆದ 19 ವರ್ಷಗಳ ಕೊಡವ ಕ್ರಿಕೆಟ್ ಹಬ್ಬದಲ್ಲಿ ಮೊದಲ ಪ್ರಯತ್ನವಾಗಿ ನಡೆದ ಕ್ರಿಕೆಟ್ ಕ್ವಿಜ್ ಸ್ಪರ್ಧೆಯನ್ನು ಐತಿಚಂಡ ರಮೇಶ್ ಉತ್ತಪ್ಪ ನಡೆಸಿಕೊಟ್ಟರು. ಅಂತಿಮ ಸುತ್ತಿನಲ್ಲಿ ವಿಜೇತ ಮೂರು ತಂಡಗಳಲ್ಲದೆ ಮಡಿಕೇರಿ ಸಂತ ಜೋಸೆಫರ ಶಾಲೆ, ರಾಜೇಶ್ವರಿ ಶಾಲಾ ತಂಡ, ನಾಪೆÇೀಕ್ಲು ಸೆಕ್ರೇಡ್ ಹಾರ್ಟ್ ಹಾಗೂ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ತಂಡ ಭಾಗವಹಿಸಿತ್ತು. ಪ್ರಥಮ ಸ್ಥಾನ ಪಡೆದ ತಂಡಕ್ಕೆ 3000 ರೂ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 2000 ರೂ ಹಾಗೂ ತೃತೀಯ ಸ್ಥಾನ ಗಳಿಸಿದ ತಂಡಕ್ಕೆ 1000 ರೂ. ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು. ಚಾಣಕ್ಯ ಸ್ಟೋಟ್ರ್ಸ್ನ ಸುರೇಶ್ ಬಿಳಿಗೇರಿ ಟ್ರೋಫಿಗಳನ್ನು ಹಾಗೂ ಉದ್ಯಮಿ ಅಡ್ಡೇಂಗಡ ತೇಜ್ ನಂಜಪ್ಪ ಅವರು ನಗದು ಬಹುಮಾನ ನೀಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಕ್ವಿಜ್ ಸ್ಪರ್ಧೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಮೊದಲ ಬಾರಿಗೆ ಕೊಡವ ಕ್ರಿಕೆಟ್ ಹಬ್ಬದ ಪರವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿರು ವದು ಪ್ರಶಂಸನೀಯ ಎಂದರು.
ಉದ್ಯಮಿ ಅಡ್ಡೇಂಗಡ ತೇಜ್ ನಂಜಪ್ಪ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರ ಹೊಮ್ಮಲು ಇಂತಹ ವೇದಿಕೆಗಳನ್ನು ಕಲ್ಪಿಸುವದು ಅವಶ್ಯಕ. ಕ್ವಿಜ್ ಗೆಲ್ಲಲು ಮಾತ್ರ ಪ್ರಯತ್ನಿಸದೆ ಜೀವನ ಗೆಲ್ಲಲು ಪ್ರಯತ್ನ ಪಡುವದು ಮುಖ್ಯವಾಗಿದೆ. ಇಂತಹ ಕಲಿಕೆ ಜೀವನದಲ್ಲಿ ಪಾಠವಾಗಲಿ. ಸೋಲಿನ ಬಗ್ಗೆ ಚಿಂತೆ ಮಾಡದೆ, ಅದು ಗೆಲುವಿನ ಮೆಟ್ಟಿಲಾಗಲಿ ಎಂದು ಹೇಳಿದರು.
ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ, ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಕ್ರಿಕೆಟ್ ಹಬ್ಬಕ್ಕೆ ಪೂರಕವಾಗಿ ಈ ರೀತಿಯ ಸ್ಪರ್ಧೆ ಏರ್ಪಡಿಸಿರುವದು ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಉಪನ್ಯಾಸಕರಾದ ಡಾ. ಜಗತ್ ನಂಜಪ್ಪ, ಪೆÇರ್ಕಡ ಸುನೀಲ್, ವಿದ್ಯಾರ್ಥಿನಿ ಫಜಾನ, ಮಡ್ಲಂಡ ಕಪ್ ಅಧ್ಯಕ್ಷ ಮೊನೀಶ್ ಸುಬ್ಬಯ್ಯ, ಉಪಾಧ್ಯಕ್ಷ ದರ್ಶನ್, ಖಜಾಂಚಿ ಬೊಳ್ಳಜಿರ ಬಿ.ಅಯ್ಯಪ್ಪ, ಐತಿಚಂಡ ರಮೇಶ್ ಉತ್ತಪ್ಪ ಭಾಗವಹಿಸಿದ್ದರು.