ಒಡೆಯುನಪುರ, ಜ. 31: ಕರ್ನಾಟಕ ಜಾನಪದ ಪರಿಷತ್ ಶನಿವಾರಸಂತೆ ಘಟಕ ಮತ್ತು ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ತಾ. 3 ರಂದು ಜಾನಪದ ಜಾತ್ರೆ ನಡೆಯಲಿರುವ ಹಿನ್ನೆಲೆ ಜಾನಪದ ಜಾತ್ರಾ ಪ್ರಯುಕ್ತ ಶಾಲಾ ವತಿಯಿಂದ ಮುಳ್ಳೂರು ಗ್ರಾಮಸ್ಥರಿಗಾಗಿ ಹಾಗೂ ಪೋಷಕರು ಮತ್ತು ಶಾಲೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸ ಲಾಯಿತು. ಕ್ರೀಡಾಕೂಟವನ್ನು ಗ್ರಾಮದ ಪ್ರಮುಖ ವೇಧಕುಮಾರ್ ಉದ್ಘಾಟಿಸಿದರು. ಗ್ರಾಮಸ್ಥರು ಮತ್ತು ಪೋಷಕರಿಗಾಗಿ ಹಗ್ಗ ಜಗ್ಗಾಟ, ಗುಡ್ಡಗಾಡು ಓಟ, ಗೋಣಿಚೀಲ ಓಟ, ಮಡಿಕೆ ಒಡೆಯುವದು, ಕಪ್ಪೆ ಓಟ ಮುಂತಾದ ಗ್ರಾಮೀಣ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ನಿಡ್ತ ಗ್ರಾ.ಪಂ. ಸದಸ್ಯ ವಿಜಯ್‍ಕುಮಾರ್, ನಿಡ್ತ ಪ್ರೌಢಶಾಲೆಯ ದೈಹಿಕ ಶಿಕ್ಷಕ ಶಿವಣ್ಣ, ಪ್ರಾಥಮಿಕ ಶಾಲೆಯ ಶಿಕ್ಷಕ ದಿನೇಶ್, ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್, ಸಹ ಶಿಕ್ಷಕ ಸಿ.ಎಸ್. ಸತೀಶ್ ಮುಂತಾದವರು ಇದ್ದರು.