*ಗೋಣಿಕೊಪ್ಪಲು, ಜ. 29: ತಿತಿಮತಿ ವ್ಯಾಪ್ತಿಯ ದೊಡ್ಡರೇಷ್ಮೆ ಹಾಡಿ ನಿವಾಸಿ ಕೆಂಚ (70) ಅವರ ಮೇಲೆ ಕಾಡಾನೆ ಧಾಳಿ ನಡೆಸಿ ಗಾಯಗೊಳಿಸಿದ ಘಟನೆ ನಡೆದಿದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆ ಕೆಂಚ ಅವರ ಬಲಗೈಗೆ ತುಳಿದು ಗಾಯಗೊಳಿಸಿದೆ. ಅವರನ್ನು ಅರಣ್ಯ ಅಧಿಕಾರಿಗಳು ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದಾರೆ. ಭಾನುವಾರ ರಾತ್ರಿ ಕಾರೆಕಂಡಿ ಹಾಡಿಯಿಂದ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ತಿತಿಮತಿ ಹೆಬ್ಬಾಲೆ ಸಮೀಪದ ಅರಣ್ಯದ ನಡುವಿನ ಹಾಡಿ ರಸ್ತೆಯಲ್ಲ್ಲಿ ಕಾಡಾನೆ ಧಾಳಿ ನಡೆಸಿದೆ. ಸ್ಥಳಕ್ಕೆ ಎ.ಸಿ.ಎಫ್ ಶ್ರೀಪತಿ, ತಿತಿಮತಿ ವಲಯ ಅರಣ್ಯಾಧಿಕಾರಿ ಆಶೋಕ್ ಭೇಟಿ ನೀಡಿದರು.