ಸಿದ್ದಾಪುರ, ಜ.29 : ವಿದ್ಯುತ್ ತಂತಿ ತುಂಡಾಗಿ ಗದ್ದೆಯಲ್ಲಿ ಬಿದ್ದ ಪರಿಣಾಮ ಅಭ್ಯತ್‍ಮಂಗಲ ಗ್ರಾಮದ ಅಂಚೆಮನೆ ಸುಧಿಕುಮಾರ್ ಅವರ ಹಾಲು ಕರಿಯುವ ಹಸುವೊಂದು ಸಾವನ್ನಪ್ಪಿದ ಘಟನೆ ಕಳೆದ ಆಗಸ್ಟ್ ತಿಂಗಳಿನಲ್ಲಿ ನಡೆದಿತ್ತು. ಬಳಿಕ ಸೆಸ್ಕಾಂ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸೋಮವಾರ ಚೆಟ್ಟಳ್ಳಿ ಸೆಸ್ಕಾಂ ಇಂಜಿನೀಯರ್ ದಿನೇಶ್ ಹಾಗೂ ಸಿಬ್ಬಂದಿ ನಾಗರಾಜ್ ಸುಧಿಕುಮಾರ್ ಅವರ ಮನೆಯಲ್ಲಿ ಪರಿಹಾರದ ಚೆಕ್ ಹಸ್ತಾಂತರಿಸಿದರು.