ಸಿದ್ದಾಪುರ, ಜ. 27: ಇತ್ತೀಚೆಗೆ ಸಿದ್ದಾಪುರ ಸಮೀಪದ ಪಲ್ಲಕೆರೆಯ ತೋಟದ ಲೈನ್‍ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯು ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು.

ಮನೆಯಲ್ಲಿದ್ದ ಬೆಳೆಬಾಳುವ ವಸ್ತುಗಳು ನಾಶವಾಗಿದ್ದವು. ಈ ಹಿನೆÀ್ನಲೆ ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಕಾರ್ಮಿಕ ಲಿಂಗಮುತ್ತು ಎಂಬವರಿಗೆ ರೂ. 5,000 ಸಹಾಯ ಧನದ ಚೆಕ್ ಅನ್ನು ಸಂಘದ ಪದಾಧಿಕಾರಿಗಳು ನೀಡಿದರು.