ಸೋಮವಾರಪೇಟೆ, ಜ. 27: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಬಿ.ಡಿ. ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಕೆ.ಜಿ. ಸುರೇಶ್ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ಅಧ್ಯಕ್ಷ ಸ್ಥಾನಕ್ಕೆ ಬಿ.ಡಿ. ಮಂಜುನಾಥ್ ಅವರ ಹೆಸರನ್ನು ಹಾಲಿ ಅಧ್ಯಕ್ಷರಾಗಿದ್ದ ಹೆಚ್.ಕೆ. ಮಾದಪ್ಪ ಸೂಚಿಸಿದರು. ನಿರ್ದೇಶಕ ಜಿ.ಬಿ. ಸೋಮಯ್ಯ ಅನುಮೋದಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಜಿ. ಸುರೇಶ್ ಹೆಸರನ್ನು ನಿರ್ದೇಶಕ ಎಂ.ಎಸ್. ಲಕ್ಷ್ಮೀಕಾಂತ್ ಸೂಚಿಸಿದರೆ, ನಿರ್ದೇಶಕ ಕೆ.ಎಸ್. ದಾಸಪ್ಪ ಅನುಮೋದಿಸಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷರಾಗಿದ್ದ ಸುಮಾ ಸುದೀಪ್, ಬಿ.ಎಂ. ಸುರೇಶ್, ರೂಪಾ ಸತೀಶ್, ಹೆಚ್.ಜಿ. ನಳಿನಿ, ಎಸ್.ಎನ್. ಸೋಮಶೇಖರ್ ಹಾಜರಿದ್ದರು. ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿ ಮೋಹನ್ ಕಾರ್ಯನಿರ್ವಹಿಸಿದರು.