ಗೋಣಿಕೊಪ್ಪಲು, ಜ. 27: ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜು ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮದಿನ ತಾ. 28ರಂದು (ಇಂದು) ನಡೆಯಲಿದ್ದು, ಆ ಪ್ರಯುಕ್ತ ಗೋಣಿಕೊಪ್ಪಲಿನ ಉಮಾಮಹೇಶ್ವರಿ ದೇವಸ್ಥಾನದಿಂದ ವೀರಾಜಪೇಟೆಯ ಪಂಜರಪೇಟೆಯವರೆಗೆ ಸ್ವಚ್ಛತಾ ಅಭಿಯಾನವನ್ನು ಏರ್ಪಡಿಸಲಾಗಿದೆ. ಮಂಗಳೂರು ವಿಶ್ವ ವಿದ್ಯಾನಿಲಯದ ಸಂಯೋಜನಾಧಿಕಾರಿ ಪ್ರೊ. ವಿನಿತ ರೈ ಉದ್ಘಾಟಿಸಲಿದ್ದಾರೆ.