ಸೋಮವಾರಪೇಟೆ, ಜ. 25: ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ರೂ. 2 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪುರಭವನದ ಒಂದನೇ ಅಂತಸ್ತಿನ ಆರ್‍ಸಿಸಿ ಕಾಮಗಾರಿ ನಡೆಯಿತು. ಸ್ಥಳಕ್ಕೆ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ಮಾಡಿದರು.

ಎಸ್‍ಎಫ್‍ಸಿ ವಿಶೇಷ ಅನುದಾನದಲ್ಲಿ ಬಿಡುಗಡೆಯಾಗಿರುವ ರೂ. 1.98 ಕೋಟಿ ಹಣದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ, ವಾಣಿಜ್ಯ ಸಂಕೀರ್ಣ ಹಾಗೂ ಮೊದಲನೇ ಅಂತಸ್ತಿನಲ್ಲಿ ಪುರಭವನ ನಿರ್ಮಿಸಲಾಗುವದು ಎಂದು ಶಾಸಕರು ತಿಳಿಸಿದರು.

ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಪ.ಪಂ. ಸದಸ್ಯರುಗಳಾದ ಸುಷ್ಮಾ ಸುಧಾಕರ್, ಲೀಲಾ ನಿರ್ವಾಣಿ, ಸುಶೀಲಾ, ಬಿ.ಎಂ. ಸುರೇಶ್, ಈಶ್ವರ್, ಮುಖ್ಯಾಧಿಕಾರಿ ನಾಚಪ್ಪ, ಕಿರಿಯ ಅಭಿಯಂತರ ವಿರೇಂದ್ರ, ಗುತ್ತಿಗೆದಾರ ಎನ್.ಎಸ್. ಶ್ರೀನಿವಾಸ್ ಮತ್ತಿತರರು ಇದ್ದರು.