ಸಿದ್ದಾಪುರ, ಜ. 23: ಎಸ್‍ಕೆಎಸ್‍ಎಸ್‍ಎಫ್ ನೆಲ್ಯಹುದಿಕೇರಿ ಘಟಕದ ಸಹಚಾರಿ ರಿಲೀಫ್ ಸೆಲ್ ವತಿಯಿಂದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಫ ತೆಗೆಯುವ 2 ಯಂತ್ರಗಳನ್ನು ಉಚಿತವಾಗಿ ನೀಡಲಾಯಿತು.

ಈ ಸಂದರ್ಭ ಎಸ್‍ಕೆಎಸ್‍ಎಸ್‍ಎಫ್ ಮುಖಂಡ ಎ.ಕೆ ಹಕೀಂ , ವಿಪಿಎಸ್ ಮುತ್ತುಕೋಯ ತಂಞಳ್, ಇಕ್ಬಾಲ್ ಮುಸ್ಲಿಯಾರ್, ವಿಕಾಯ ಸೆಲ್ ಕಾರ್ಯದರ್ಶಿ ಶಮೀರ್, ರಜಾಕ್, ನಿಯಾಜ್, ಶಂಶೀರ್, ಸಲಾಂ ಮತ್ತು ಇತರರು ಇದ್ದರು.