ಕುಶಾಲನಗರ, ಜ. 7: ಸ್ಥಳೀಯ ಅಪ್ಪಚ್ಚು ಬಳಗದ ವತಿಯಿಂದ ಅಪ್ಪಚ್ಚು ಸ್ಮರಣಾರ್ಥ ಮೂರನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ತಾ. 27 ಮತ್ತು 28 ರಂದು ನಡೆಯಲಿದೆ ಎಂದು ಬಳಗದ ಕಾರ್ಯದರ್ಶಿ ಪವನ್ ಗಣಪತಿ ತಿಳಿಸಿದರು.

ಶಿಕ್ಷಕರು ಹಾಗೂ ಕ್ರಿಕೆಟ್ ಪಟು ವಾಗಿದ್ದು ಅಕಾಲಿಕ ಮರಣಕ್ಕೀಡಾದ ಅಪ್ಪಚ್ಚು ಸ್ಮರಣಾರ್ಥ ಕಳೆದ 2 ವರ್ಷಗಳಿಂದ ಕುಶಾಲನಗರದಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ 24 ತಂಡಗಳು ಪಾಲ್ಗೊಂಡಿದ್ದವು.

ಆಟವಾಡಲು ಸಮಯದ ಅಭಾವ ಇರುವದರಿಂದ ಈ ವರ್ಷ ಮೊದಲು ಬಂದ 20 ತಂಡಗಳಿಗೆ ಅವಕಾಶ ಕಲ್ಪಿಸ ಲಾಗುವದು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಕ್ಕೆ 40 ಸಾವಿರ ರೂಪಾಯಿ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ 30 ಸಾವಿರ ರೂಪಾಯಿ ನಗದು ಮತ್ತು ಟ್ರೋಫಿ ನೀಡಲಾಗುವದು. ಭಾಗವಹಿಸುವ ತಂಡಗಳು ತಾ. 15 ರೊಳಗೆ ಹೆಸರು ನೋಂದಾಯಿಸಬೇಕು.

ಆಸಕ್ತರು ಬಳಗದ ಅಧ್ಯಕ್ಷರು ಯತೀಶ್ (ಮೊ 98455 65410), ಪವನ್ (ಮೊ 98454 36060), ಧರ್ಮ (ಮೊ 98456 58600) ಅಥವಾ ತಿಲಕ್ (ಮೊ. 98869 27041) ಸಂಪರ್ಕಿಸುವಂತೆ ಕೋರಿದ್ದಾರೆ.

ಗೋಷ್ಠಿಯಲ್ಲಿ ಬಳಗದ ಪದಾಧಿಕಾರಿಗಳಾದ ಅನುದೀಪ್, ಸುರೇಶ್, ತಿಲಕ್, ದರ್ಶನ್, ದೀಪು, ಜಿಯಾವುದ್ದೀನ್ ಇದ್ದರು.