ಮಡಿಕೇರಿ, ಡಿ.30 : ಕೊಡಗು ಜಿಲ್ಲಾ ಪ್ರಬುದ್ಧ ನೌಕರರ ಒಕ್ಕೂಟ, ಅಶೋಕಪುರದ ಸಂತೋಷ್ ಯುವಕ ಸಂಘ, ಮಲ್ಲಿಕಾರ್ಜುನ ನಗರದ ಜ್ಯೋತಿ ಯುವಕ ಸಂಘ ಹಾಗೂ ನಗರದ ಎಲ್ಲಾ ದಲಿತ ಮತ್ತು ಪ್ರಗತಿಪರ ಒಕ್ಕೂಟಗಳ ಸಹಯೋಗ ದಲ್ಲಿ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯನ್ನು ತಾ.31 ರಂದು (ಇಂದು) ನಗರದ ಕಾರ್ಯಪ್ಪ ವೃತ್ತದ ಬಳಿ ಇರುವ ಡಾ.ಅಂಬೇಡ್ಕರ್ ಭವನದಲ್ಲಿ ಆಚರಿಸಲಾಗುತ್ತಿದೆ.
ರಾತ್ರಿ 8.30 ಗಂಟೆಗೆ ನಗರದ ಇಂದಿರಾಗಾಂಧಿ ವೃತ್ತದಿಂದ ಕಾರ್ಯಪ್ಪ ವೃತ್ತದವರೆಗೆ ಪಂಜಿನ ಮೆರವಣಿಗೆ ಹಾಗೂ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ರಾತ್ರಿ 12 ಗಂಟೆಗೆ ಡಾ.ಅಂಬೇಡ್ಕರ್ ಭವನದ ಎದುರು ಕೋರೆಗಾಂವ್ ಯುದ್ದದಲ್ಲಿ ಹುತಾತ್ಮರಾದ 22 ವೀರ ಯೋಧರ ಗೌರವಾರ್ಥ 22 ದೀಪಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಗುವದು.