ನಾಪೆÇೀಕ್ಲು, ಡಿ. 23: ಬಸವ ಕಲ್ಯಾಣ ಯೋಜನೆಯಡಿಯಲ್ಲಿ ನಾಪೆÉÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ 60 ಫಲಾನುಭವಿ ಬಡವರಿಗೆ ಮನೆ ನಿರ್ಮಿಸಲು ಹಕ್ಕು ಪತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ವಿತರಿಸಿದರು. ನಂತರ ಮಾತನಾಡಿದ ಅವರು, ರಾಜ್ಯ ಸರಕಾರ ಬಡ ಜನರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶದ ಜನರ ಏಳಿಗೆಗಾಗಿ ರೈತರ ಸಾಲ ಮನ್ನಾ, ರಸ್ತೆ ಅಭಿವೃದ್ಧಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಚೋಕಿರ ರೋಷನ್, ಟಿ.ಎ. ಮಹಮ್ಮದ್, ಎಂ.ಎಂ. ಅಮೀನ, ಪುಲ್ಲೇರ ಪದ್ಮಿನಿ, ಬೊಟ್ಟೋಳಂಡ ಚಿತ್ರ, ರೋಹಿಣಿ, ಸುಶೀಲಮ್ಮ, ಚೀಯಕಪೂವಂಡ ಮುತ್ತುರಾಣಿ ಅಚ್ಚಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಟಿ.ಆರ್. ಕೇಶವ, ಸಿಬ್ಬಂದಿಗಳಾದ ನಂದಿನಿ, ನರೇನ್, ಮಂಜು, ಸುಬ್ಬಯ್ಯ, ಕುಟ್ಟಪ್ಪ ಮತ್ತಿತರರು ಇದ್ದರು.