ಸೋಮವಾರಪೇಟೆ, ಡಿ. 23: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಿಷಪೂರಿತ ಹಾವು ಕಚ್ಚಿ ಸಾವಿರಾರು ರೂಪಾಯಿ ಚಿಕಿತ್ಸೆಗೆ ವ್ಯಯಿಸಿದ ಯಡೂರು ಗ್ರಾಮದ ವೀರಪ್ಪ ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಬಿಡುಗಡೆಯಾದ 24,571 ರೂಪಾಯಿಗಳ ಚೆಕ್‍ನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಶಾಸಕರ ಕಚೇರಿಯಲ್ಲಿ ವಿತರಿಸಿದರು.