ಸಿದ್ದಾಪುರ, ಡಿ. 13: ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಸಿ. ಹಸೈನಾರ್ ಹಾಜಿ ಅವರನ್ನು ಹುಂಡಿ ಗ್ರಾಮಾಸ್ಥರ ಪರವಾಗಿ ಮಾಲ್ದಾರೆ ವಲಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಿ.ಎ. ಹಂಸ ಸನ್ಮಾನಿಸಿದರು. ಹುಂಡಿಯ ಮೈದಾನ ಸುತ್ತಲು ತಡೆಗೋಡೆಯ ಅವಶ್ಯಕತೆವಿದ್ದು ಈ ಬಗ್ಗೆ ಕಾಮಗಾರಿ ನಿರ್ವಹಿಸಲು ಸರ್ಕಾರದಿಂದ ಹಣ ಮಂಜೂರಾತಿ ಮಾಡಿ ಕೊಡುವಂತೆ ಹಸೈನಾರ್ ಅವರ ಬಳಿ ಮನವಿ ಮಾಡಿದರು.