ನಾಪೆÇೀಕ್ಲು, ಡಿ. 12: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿದ ಕೊಡವ ದಿವ್ಯಾತ್ಮಗಳಿಗೆ ದೇವಾಟ್ ಪರಂಬುವಿನಲ್ಲಿ ಪುಷ್ಪಾಂಜಲಿ ಅರ್ಪಿಸಲಾಯಿತು. 232 ವರ್ಷಗಳ ಹಿಂದೆ ಡಿ. 12ರಂದು ಟಿಪ್ಪು ಸುಲ್ತಾನನ ಕುತಂತ್ರಕ್ಕೆ ಬಲಿಯಾಗಿ ವೀರ ಮರಣವನ್ನಪ್ಪಿದ ಕೊಡವರ ದಿವ್ಯಾತ್ಮಗಳಿಗೆ ಸಿಎನ್‍ಸಿಯಿಂದ ಪುಷ್ಪ ಗುಚ್ಚವಿರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭ ಸಿಎನ್‍ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಅರೆಯಡ ಗಿರೀಶ್, ಕಾಟುಮಣಿಯಂಡ ಉಮೇಶ್ ಇದ್ದರು.