ಸೋಮವಾರಪೇಟೆ, ಡಿ.12: 2 ಲಕ್ಷ ಮೌಲ್ಯದ ಕಾಡುಜಾತಿಯ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖಾ ಅಧಿಕಾರಿಗಳು, ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಶನಿವಾರಸಂತೆ ಸಮೀಪದ ಕಣಗಾಲು ಗ್ರಾಮದಲ್ಲಿ ಕಾಡುಜಾತಿಯ ಮರಗಳನ್ನು ಅಕ್ರಮವಾಗಿ ಕಡಿದು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಶನಿವಾರಸಂತೆಯ ನಿವಾಸಿಗಳಾದ ವರುಣ್‍ಕುಮಾರ್, ಚನ್ನೋಜಿರಾವ್ ಅವರುಗಳನ್ನು ಬಂಧಿಸಲಾಗಿದೆ. ರೂ. 2 ಲಕ್ಷ ಮೌಲ್ಯದ ಮರ ಸಹಿತ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎನ್. ಲಕ್ಷ್ಮೀಕಾಂತ್, ಡಿ.ಆರ್.ಎಫ್.ಓ. ಮಹದೇವನಾಯ್ಕ, ಅರಣ್ಯ ರಕ್ಷಕ ರಾಜು, ಸಿಬ್ಬಂದಿ ವಿಜಯ ಅವರುಗಳು ಭಾಗವಹಿಸಿದ್ದರು.