ನಾಪೋಕ್ಲು, ಡಿ. 9: ಇಲ್ಲಿಗೆ ಸಮೀಪದ ಕೈಕಾಡು ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ಬಾದುಮಂಡ ಗಣಪತಿ ಅವರಿಗೆ ಸೇರಿದ ಗದ್ದೆಯಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿರುವದಾಗಿ ತಿಳಿದು ಬಂದಿದೆ. ಗದ್ದೆಯಲ್ಲಿ ಮೇಯಲು ಜಾನುವಾರುಗಳನ್ನು ಕಟ್ಟಲಾಗಿದ್ದು ಜಾನುವಾರುಗಳು ಹಗ್ಗ ತುಂಡರಿಸಿ ಓಡಿಹೋಗಿದ್ದರ ಕಾರಣವನ್ನು ತಿಳಿಯಲು ಪರಿಶೀಲಿಸಿ ದಾಗ ಚಿರತೆಯ ಹೆಜ್ಜೆಗುರುತುಗಳು ಕಂಡುಬಂದಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.