ಮಡಿಕೇರಿ, ಡಿ. 8: ಕೊಡಗು ಜಿಲ್ಲಾ ಪ್ರಬುದ್ಧ ನೌಕರರ ಒಕ್ಕೂಟ ಹಾಗೂ ಸಂತೋಷ ಯುವಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 62ನೇ ಮಹಾ ಪರಿನಿರ್ವಾಣ ದಿನವನ್ನು ರಕ್ತದಾನ ಶಿಬಿರದ ಮೂಲಕ ಆಚರಿಸಲಾಯಿತು.

ಪ್ರಬುದ್ಧ ನೌಕರರ ಒಕ್ಕೂಟದ ಸದಸ್ಯರು ಹಾಗೂ ಸಂತೋಷ ಯುವಕ ಸಂಘದ ಸದಸ್ಯರುಗಳು ನಗರದಲ್ಲಿ ರಕ್ತದಾನ ಮಾಡಿ ಡಾ. ಅಂಬೇಡ್ಕರ್ ಅವರನ್ನು ಸ್ಮರಿಸಿದರು. ಒಕ್ಕೂಟದ ಪ್ರಮುಖರಾದ ಡಾ. ದೇವದಾಸ್, ಡಾ. ಸತೀಶ್, ಅರುಣ್, ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಹೆಚ್.ಎಲ್. ದಿವಾಕರ್ ಉಪಸ್ಥಿತರಿದ್ದರು. ಜಿಲ್ಲಾಸ್ಪತ್ರೆಯ ಡಾ. ಕರುಂಬಯ್ಯ, ಸಿಬ್ಬಂದಿಗಳಾದ ಪಂಚಲಿಂಗೇಶ್ವರ, ಡೈನಾ, ಶುಭ, ವೆಂಕಟೇಶ್, ಸೈಯದ್ ಮತ್ತಿತರರು ರಕ್ತದಾನ ಶಿಬಿರವನ್ನು ನಿರ್ವಹಿಸಿದರು.