ಕರಿಕೆ, ಡಿ. 8: ಇಲ್ಲಿನ ಎಳ್ಳುಕೊಚ್ಚಿ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಬಯಲು ರಂಗಮಂದಿರ ನಿರ್ಮಾಣ ಕಾಮಗಾರಿಗೆ ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ. ಶಾಲೆಗೆ ರಂಗಮಂದಿರದ ಕೊರತೆ ಇದ್ದು ಗ್ರಾಮಸ್ಥರ ಹಾಗೂ ಶಾಲೆಯ ಮನವಿಗೆ ಸ್ಪಂದಿಸಿ ಇದೀಗ ಜಿ.ಪಂ.ಅನುದಾನದಲ್ಲಿ ಸುಮಾರು ಎರಡೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ರಂಗಮಂದಿರ ನಿರ್ಮಾಣ ಮಾಡಲಾಗುವದೆಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯೆ ಉಷಾಕುಮಾರಿ, ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷ ರುಗಳಾದ ವೆಂಕಪ್ಪ ಗೌಡ,ಕಟ್ಟಕೋಡಿ ರಘು ರಾಮ, ಆರ್‍ಎಂಸಿ ಸದಸ್ಯ ನಾರಾಯಣ, ಪ್ರಮುಖರಾದ ಹೊಸಮನೆ ಹರೀಶ್ ಐಸಾಕ್, ಧನಂಜಯ ಕುದುಪಜೆ, ಪಾಂಡಿ ನಂಜುಂಡ, ಗುತ್ತಿಗೆದಾರ ರಮೇಶ್ ಸೇರಿದಂತೆ ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.