ವೀರಾಜಪೇಟೆ, ಡಿ. 8: ವೀರಾಜಪೇಟೆ ಕೊಡವ ಸಮಾಜದಿಂದ ಹುತ್ತರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಹುತ್ತರಿ ಹಬ್ಬದ ಪ್ರಯುಕ್ತ ರಾತ್ರಿ 7.30 ಗಂಟೆಗೆ ಸಾಂಪ್ರದಾಯಿಕ ಪೂಜೆಯ ನಂತರ ನೆರೆ ಕಟ್ಟಲಾಯಿತು. ವಾಲಗದೊಂದಿಗೆ ಕೊಡವ ಸಮಾಜದ ಒತ್ತಾಗಿರುವ ಗದ್ದೆಗೆ ತೆರಳಿದ ಪ್ರಮುಖರು ಗದ್ದೆಯಲ್ಲಿ ಕದಿರಿಗೂ ಪೂಜೆ ನೆರವೇರಿಸಿ ಕದಿರನ್ನು ತೆಗೆಯಲಾಯಿತು.

ಕೊಡವ ಸಮಾದ ಅಧ್ಯಕ್ಷ ವಾಂಚೀರ ಟಿ.ನಾಣಯ್ಯ ನೇತೃತ್ವದಲ್ಲಿ ನಡೆದ ಹುತ್ತರಿ ಹಬ್ಬದ ಸಮಾರಂಭದಲ್ಲಿ ಕುಲ್ಲಚಂಡ ಪೂಣಚ್ಚ, ಕನ್ನಂಬೀರ ಪೂಣಚ್ಚ, ಅಲ್ಲಪಂಡ ಚಿಣ್ಣಪ್ಪ, ಕೂತಂಡ ನಾಣಯ್ಯ, ಸಮಾಜದ ಮಾಜಿ ಅಧ್ಯಕ್ಷ ನಾಯಡ ವಾಸು ನಂಜಪ್ಪ ಮತ್ತಿತರರು ಭಾಗವಹಿಸಿದ್ದರು.