ಶನಿವಾರಸಂತೆ, ಡಿ. 8: ಮಡಿಕೇರಿ ಅರಣ್ಯ ವಿಭಾಗದ ವತಿಯಿಂದ ಬೀದಿ ನಾಟಕ ವನ್ನು ಆಯೋಜಿಸ ಲಾಯಿತು. ಕೆ.ಆರ್. ನಗರದ ಪ್ರಗತಿ ಕಲಾ ತಂಡದವರು ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಬೀದಿ ನಾಟಕವನ್ನು ಪ್ರದರ್ಶಿಸಿದರು.

ಈ ಸಂದರ್ಭ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್, ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಉಪ ಅರಣ್ಯ ವಲಯಾಧಿಕಾರಿ ಶ್ರೀನಿವಾಸ್, ಅರಣ್ಯ ರಕ್ಷಕರಾದ ಲೋಹಿತ್, ಹರೀಶ್ ಕುಮಾರ್, ಭರತ್, ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.