ಮಡಿಕೇರಿ, ಡಿ. 6: ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮದಲ್ಲಿ ಎಂಎಲ್ಸಿ ವೀಣಾಅಚ್ಚಯ್ಯ, ಉಸ್ತುವಾರಿ ಕೊಲ್ಯದ ಗಿರೀಶ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಮನೆಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಕಾರ್ಯಕರ್ತರು ಪ್ರತಿ ಮನೆಮನೆಗಳಿಗೆ ತಲಪಿಸಬೇಕೆಂದು ವೀಣಾ ಅಚ್ಚಯ್ಯ ಹೇಳಿದರು. ಈ ಸಂದರ್ಭ ಮಕ್ಕಂದೂರು ವಿಎಸ್ಎಸ್ಎನ್ ನಿರ್ದೇಶಕ ಕುಂಬಗೌಡನ ಪ್ರಸನ್ನ, ಕಾಂಗ್ರೆಸ್ ಕಾರ್ಯಕರ್ತರುಗಳಾದ ಹಂಚೆಟ್ಟಿರ ಮನು ಮುದ್ದಪ್ಪ, ನಯನ ಇನ್ನಿತರರಿದ್ದರು.