ಕÀುಶಾಲನಗರ, ಡಿ. 2: ಕುಶಾಲನಗರ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ 32ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ಭಕ್ತಿಭಾವಗಳೊಂದಿಗೆ ನಡೆಯಿತು. ಶ್ರೀ ಆಂಜನೇಯ ಸೇವಾ ಸಮಿತಿ ಮತ್ತು ಶ್ರೀ ರಾಮಾಂಜನೇಯ ಯುವಕ ಸಂಘ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ದೇವರಿಗೆ ಬೆಳಿಗ್ಗೆ ಅಭಿಷೇಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ತೆರಳಿ ಫಲಪುಷ್ಪ ಅರ್ಪಿಸುವದರೊಂದಿಗೆ ಸಾಮೂಹಿಕ ಪೂಜೆ ಸಲ್ಲಿಸಿದರು. ಆಂಜನೇಯ ದೇವಸ್ಥಾನದ ಹಿರಿಯ ಅರ್ಚಕ ಡಾ.ರಾಧಾಕೃಷ್ಣ ಭಟ್ ಅವರ ನೇತೃತ್ವದ ಅರ್ಚಕರು ಪೂಜಾ ವಿಧಿವಿಧಾನಗಳಲ್ಲಿ ತೊಡಗಿಸಿಕೊಂಡರು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ತೆರಳಿತು. ಪ್ರಮುಖರಾದ ವಿ.ಡಿ. ಪುಂಡರೀಕಾಕ್ಷ, ಡಿ.ಸಿ. ಜಗದೀಶ್, ಆರ್. ರಾಜೀವ್, ಸದಾಶಿವ, ಜನಾರ್ಧನ್, ವಿ.ಹೆಚ್. ಪ್ರಸನ್ನ ಮತ್ತು ಸಮಿತಿಯವರು ಇದ್ದರು.