ಆಲೂರು ಸಿದ್ದಾಪುರ, ಸೆ. 5: ಇತ್ತೀಚಿಗೆ ಶನಿವಾರಸಂತೆಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟ ಹಾಗೂ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಮಾಲಂಬಿ ಸರಕಾರಿ ಗಿರಿಜನ ಆಶ್ರಮ ಶಾಲೆ ಸಮಗ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಬಾಲಕಿಯರ ವಿಭಾಗದ ಕಬ್ಬಡಿ ಸ್ಪರ್ಧೆಯಲ್ಲಿ [ಪ್ರಥಮ], ಡಿಸ್ಕಸ್ ಥ್ರೋ ನಲ್ಲಿ [ಪ್ರಥಮ], ಎತ್ತರ ಜಿಗಿತ ದಲ್ಲಿ [ಪ್ರಥಮ] ಮತ್ತು 400 ಮೀ ರಿಲೆ ಯಲ್ಲಿ[ತೃತೀಯ] ಸ್ಥಾನ ಪಡೆದುಕೊಂಡರೆ, ಬಾಲಕರ ವಿಭಾಗದ ಉದ್ದಜಿಗಿತ ದಲ್ಲಿ [ಪ್ರಥಮ], ಎತ್ತರಜಿಗತ ದಲ್ಲಿ [ಪ್ರಥಮ], ಭಾರದ ಗುಂಡು ಎಸೆತದಲ್ಲಿ [ದ್ವಿತೀಯ] ಸ್ಥಾನ ಪಡದುಕೊಂಡಿದ್ದಾರೆ.

ವಲಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಜಾನಪದ ನೃತ್ಯ ಸ್ಪರ್ಧೆಯಲ್ಲಿ [ಪ್ರಥಮ] ರಸಪ್ರಶ್ನೆ ಸ್ಪರ್ಧೆಯಲ್ಲಿ [ದ್ವಿತೀಯ] ಹಾಗೂ ಅಭಿನಯ ಹಾಡುಗಾರಿಕೆ ಸ್ಪರ್ಧೆಯಲ್ಲಿ [ದ್ವಿತೀಯ] ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸಮಗ್ರ ಪ್ರಶಸ್ತಿಗಳನ್ನು ಪಡೆದುಕೊಂಡ ಆಶ್ರಮ ಶಾಲೆಯ ಮಕ್ಕಳು ತಾಲೂಕು ಮಟ್ಟದ ಕ್ರೀಡಾಕೂಟ ಮತ್ತು ಪ್ರತಿಭಾ ಕಾರಂಜಿಗೆ ಆಯ್ಕೆಗೊಂಡಿದ್ದಾರೆ.