ಗುಡ್ಡೆಹೊಸೂರು, ಸೆ. 5: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಬೋಲೆರೋ ಕಾರು ದನಗಳಿಗೆ ಡಿಕ್ಕಿ ಹೊಡೆದು ಅದೃಷ್ಟವಶಾತ್ ಕೇರಳದಿಂದ ಪ್ರವಾಸಕ್ಕೆ ಆಗಮಿಸಿದ ಯುವಕರ ತಂಡ ಅನಾಹುತದಿಂದ ಪಾರಾಗಿದೆ. ಕುಶಾಲನಗರ ಕಡೆಯಿಂದ ಮಡಿಕೇರಿಗೆ ಚಲಿಸುತ್ತಿದ್ದ ಕಾರು (ಕೆ.ಎಲ್.14.6169) ಅತೀ ವೇಗವಾಗಿ ಬಂದು ದÀನಗಳಿಗೆ ಡಿಕ್ಕಿಯಾದ ಸಂದÀರ್ಭ ಎರಡು ದನಗಳು ಸ್ಥಳದಲ್ಲೆ ಮೃತಪಟ್ಟಿವೆ. ನಂತರ ವಾಹನ ಸುಮಾರು 50 ಮೀ. ದೂರ ಚಲಿಸಿ ಮೋರಿಗೆ ಅಪ್ಪಳಿಸಿ ನಿಂತಿದೆ. ಮೋರಿ ಇಲ್ಲದಿದ್ದರೆ ಭಾರಿ ಗುಂಡಿಗೆ ಕಾರು ಬಿದ್ದು ಅನಾಹುತ ಸಂಭವಿಸುವ ಸಾಧ್ಯತೆಯಿತು.