ಸೋಮವಾರಪೇಟೆ, ಆ.22 : ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಘರ್ಷಣೆ ಏರ್ಪಟ್ಟು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು-ಪ್ರತಿದೂರು ದಾಖಲಾಗಿದೆ.ರೇಂಜರ್ ಬ್ಲಾಕ್ ನಿವಾಸಿ ಮಿಲನ್ ಎಂಬವರು ತಮ್ಮ ಸ್ನೇಹಿತ ಕೀರ್ತನ್ ಅವರೊಂದಿಗೆ ನಗರದಲ್ಲಿದ್ದ ಸಂದರ್ಭ ತನ್ನ ಸ್ಕೂಟರ್‍ನಲ್ಲಿ ಆಗಮಿಸಿದ ಜನತಾಕಾಲೋನಿ ನಿವಾಸಿ ಹರ್ಷಿತ್ ಎಂಬಾತ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ಮಿಲನ್ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಇದೇ ಘಟನೆಗೆ ಸಂಬಂಧಿಸಿದಂತೆ ಹರ್ಷಿತ್ ಸಹ ದೂರು ನೀಡಿದ್ದು, ತನ್ನ ಮೇಲೆ ಮಿಲನ್ ಮತ್ತು ಐಗೂರು ನಿವಾಸಿ ಭರತ್ ಅವರುಗಳು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿರುವದಾಗಿ ತಿಳಿಸಿದ್ದಾರೆ. ಇತ್ತಂಡಗಳ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.