ಸಿದ್ದಾಪುರ, ಜೂ.23 : 7ನೇ ಹೊಸಕೋಟೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿರುವದನ್ನು ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮೇಲೆ ರಮಾನಾಥ್ ರೈ ಸುಳ್ಳು ಆರೋಪ ಹೊರಿಸಿ ಬಂಧಿಸುವಂತೆ ಆದೇಶ ನೀಡಿರುವದನ್ನು ಖಂಡಿಸಿ ವಿವಿಧÀ ಹಿಂದೂ ಸಂಘಟನೆಗಳಿಂದ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಲಾಯಿತು.

ಈ ಸಂದರ್ಭ ಹಿಂದೂ ಸಂಘಟನೆಯ ಪ್ರಮುಖರಾದ ಉದ್ದಪಂಡ ಜಗತ್, ಕುಟ್ಟಂಡ ಪ್ರಿನ್ಸ್ ಗಣಪತಿ, ಎನ್.ಕೆ ಸುರೇಶ್, ಕೆ.ಡಿ ನಾಣಯ್ಯ, ಪ್ರವೀಣ್, ಬಿ .ಎಸ್ ಮೋಹನ್ ಮತ್ತು ಕಾರ್ಯಕರ್ತರು ಹಾಜರಿದ್ದರು.