ಗುಡ್ಡೆಹೊಸೂರು, ಏ. 19: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದ ಶ್ರೀಮುತ್ತಪ್ಪ ದೇವಸ್ಥಾನದ 3ನೇ ವರ್ಷದ ವಾರ್ಷಿಕ ಮಹೋತ್ಸವ ಮೂರು ದಿನಗಳ ಕಾಲ ನಡೆಯಲಿದೆ. ತಾ. 21, 22, ಮತ್ತು 23 ರಂದು ನಡೆಯಲಿದ್ದು, ತಾ. 21 ರಂದು ಬೆಳಿಗ್ಗೆ 6 ಗಂಟೆಯಿಂದ ಕಗ್ಗೋಡ್ಲು ರಾಮಚಂದ್ರ ಭಟ್ ಅವರಿಂದ ವಿವಿಧ ಪೂಜಾಕಾರ್ಯಗಳು ನೆರವೇರಲಿವೆ. ಅಂದು 11.30ಕ್ಕೆ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಕಳಸಪೂಜೆ, 12.30ಕ್ಕೆ ಶ್ರೀಮುತ್ತಪ್ಪ ದೇವಸ್ಥಾನಕ್ಕೆ ತಲುಪುವದು. ಸಂಜೆ 6.30ಕ್ಕೆ ವೆಳ್ಳ್ಳಾಟಂ ನಡೆಯಲಿದೆ ತಾ. 22 ರಂದು ಮಂಜಾನೆಯಿಂದ ವಿವಿಧ ಪೂಜಾಕಾರ್ಯ ನಡೆಯಲಿದೆ. ಅಂದು ಸಂಜೆ 6.30ಕ್ಕೆ ಶ್ರೀಮುತ್ತಪ್ಪನ್, ತಿರುವಪ್ಪ ತೆರೆ ನಡೆಯಲಿದೆ, ತಾ. 23 ರಂದು ಬೆಳಿಗ್ಗೆ 5.30ಕ್ಕೆ ಶ್ರೀಮುತ್ತಪ್ಪನ್, ತಿರುವಪ್ಪನ್ ತೆರೆ ನಡೆಯಲಿದ್ದು, ಮೂರು ದಿನಗಳ ಕಾಲ ಭಕ್ತರಿಗೆ ಅನ್ನದಾನ ನೆರವೇರಲಿದೆ.