ಬೆಂಗಳೂರು, ಏ. 19: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ತರಬಾರದು, ಸಾರಾಸಗಟಾಗಿ ವರದಿ ಅನುಷ್ಠಾನ ತಿರಸ್ಕರಿಸಬೇಕು, ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿ ವಿಚಾರದಲ್ಲಿ ಜನವಸತಿ ಬಿಟ್ಟು ಉಳಿದ ಪ್ರದೇಶ ರಕ್ಷಿಸಲಾಗುತ್ತಿದ್ದು, ಇದು ಜನತೆಗೆ ಸಂಕಷ್ಟ ತಂದೊಡ್ಡಲಿದೆ ಹಾಗಾಗಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಬೇಡ ಎಂದು ಆಕ್ಷೇಪಣೆ ಸಲ್ಲಿಸಲು ಸಭೆ ತೀರ್ಮಾನಿಸಿದರು.