ಕೂಡಿಗೆ, ಏ. 19: ಕೂಡಿಗೆ ಕೆನರಾ ಬ್ಯಾಂಕ್ ಮುಂಬಾಗದ ರಸ್ತೆಯಲ್ಲಿ ತಾ. 13ರ ರಾತ್ರಿ ಮೋಟಾರ್ ಬೈಕ್ ಚಾಲಕನೋರ್ವ ಅತಿವೇಗದಿಂದ ಬಂದು ರಸ್ತೆ ಬದಿಯಲ್ಲಿ ಅಪರಿಚಿತ ಪಾದಚಾರಿಗೆ ಡಿಕ್ಕಿ ಹೊಡೆದು ಕಾಲು ಮುರಿದು ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳುವನ್ನು ಬಿಟ್ಟು ಪರಾರಿಯಾಗಿದ್ದ ಘಟನೆ ಈಗಾಗಲೇ ವರದಿಯಾಗಿತ್ತು. ಗಾಯಾಳುವನ್ನು ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಜಗದೀಶ್ ಮಡಿಕೇರಿ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದರು. ಬಲ ಕಾಲಿಗೆ ಹಾಗೂ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾದ ಪರಿಣಾಮ ನೆನಪಿನ ಶಕ್ತಿ ಕಳೆದುಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಹಿನ್ನಲೆಯಲ್ಲಿ ಆತನ ಸಂಬಂಧಿಕರು ಯಾರೆಂಬದು ತಿಳಿದು ಬಂದಿಲ್ಲ.

ಈ ಅಪರಿಚಿತ ವ್ಯಕ್ತಿಯ ವಯಸ್ಸು ಅಂದಾಜು 60 ಎಂದು ಗುರುತಿಸ ಲಾಗಿದ್ದು, 5.6 ಅಡಿ ಎತ್ತರ ಇದ್ದಾರೆ. ಅರಿಶಿಣ ಮತ್ತು ಕಂದು ಬಣ್ಣದ ಪಂಚೆ, ತಿಳಿ ಗುಲಾಬಿ ಬಣ್ಣದ ಉದ್ದ ತೋಳಿನ ಶರ್ಟ್ ಧರಿಸಿದ್ದಾರೆ. ಈ ಚಹರೆ ಹೋಲುವ ವ್ಯಕ್ತಿಯ ಸಂಬಂಧಿಕರಿದ್ದಲ್ಲಿ ದೂರವಾಣಿ ಸಂಖ್ಯೆ. 08272-229000, 08272-274747, 08276-278833 ಸಂಪರ್ಕಿಸಬಹುದು.