ಕುಶಾಲನಗರ, ಮಾ. 5: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಮೈಸೂರಿನ ಕಾವೇರಿ ಆಸ್ಪತ್ರೆ ಎದುರು ಮಗುವಿನ ಪೋಷಕರು ಹಾಗೂ ಇನ್ನಿತರರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಕುಶಾಲನಗರ ನಿವಾಸಿ, ಮುಖೇಶ್ ಎಂಬವರ ಪುತ್ರ ಬಿಪಿನ್ (7)ನನ್ನು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ನೀಡಿದ ಇಂಜೆಕ್ಷನ್‍ನಿಂದ ಮಗುವಿನ ಆರೋಗ್ಯ ಏರುಪೇರಾಗಿದ್ದು, ಚೇತರಿಸಿಕೊಳ್ಳದೇ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ. ಈ ಹಿನ್ನೆಲೆಯಲ್ಲಿ ಮಗುವಿನ ಪೋಷಕರು, ಸ್ನೇಹಿತರು ಹಾಗೂ ಮಹಿಳೆಯರು ಆಸ್ಪತ್ರೆ ಎದುರು ತಡರಾತ್ರಿವರೆಗೂ ಧರಣಿ ಕುಳಿತ್ತಿದ್ದು, ಸ್ಥಳಕ್ಕೆ ಶಾಸಕ ಸಾ.ರಾ. ಮಹೇಶ್ ಭೇಟಿ ನೀಡಿ ಧರಣಿ ನಿರತರನ್ನು ಸಮಾಧಾನಪಡಿಸಿ ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರು.