ಗುಡ್ಡೆಹೊಸೂರು, ಮಾ. 3: ಇಲ್ಲಿನ ಅತ್ತೂರು ಗ್ರಾಮದಲ್ಲಿ ನೆಲಸಿದ್ದ ಅಲ್ಲಿನ ನಿವಾಸಿ ಚಂದಪ್ಪ ಅವರ ಏಕೈಕ ಪುತ್ರ ಪ್ರವೀಣ್ ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕೊಲೆಯಾದ ಹಿನ್ನೆಲೆ ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಸಂಘ ಪರಿವಾರದಿಂದ ಇತ್ತೀಚೆಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

ಹಿಂದೂ ಸಹಾಯವಾಣಿ ಮಡಿಕೇರಿ ಘಟಕದ ವತಿಯಿಂದ 100 ಚೀಲ ಸಿಮೆಂಟನ್ನು ದಾನವಾಗಿ ನೀಡಲಾಗಿದೆ. ಮಡಿಕೇರಿ ತಾಲೂಕಿನ ಹಿಂದೂಪರ ಸಂಘಟನೆಗಳ ಮುಖಂಡರು ಪ್ರವೀಣ್ ಮನೆಗೆ ಆಗಮಿಸಿ ತಂದೆ ಚಂದಪ್ಪ ಅವರಿಗೆ ರೂ. 45 ಸಾವಿರ ನೀಡಿ ಉಳಿದ ಮೊತ್ತದ ಸಿಮೆಂಟನ್ನು ಮೂರ್ನಾಡಿನಿಂದ ಸರಬರಾಜು ಮಾಡಲಾಗುವದೆಂದು ತಿಳಿಸಿದರು.

ಈ ಸಂದರ್ಭ ಮೂರ್ನಾಡು ಮತ್ತು ಮಡಿಕೇರಿಯ ಹಿಂದೂಪರ ಸಂಘಟನೆಯ ಮುಖಂಡರು ಹಾಜರಿದ್ದರು. ಮನೆಯ ಕಾಮಗಾರಿಯನ್ನು ಕುಶಾಲನಗರದ ಕಾರ್ಯಕರ್ತರು ನಡೆಸುತ್ತಿದ್ದಾರೆ.