ಗುಡ್ಡೆಹೊಸೂರು, ಮೇ 6: ಇಲ್ಲಿಗೆ ಸಮೀಪದ ಆನೆಕಾಡುವಿನ ತಿರುವಿನಲ್ಲಿ ಪುತ್ತೂರಿನಿಂದ ಆಗಮಿಸಿದ ಪ್ರವಾಸಿ ತಂಡದ ಕಾರು (ಕೆ.ಎ.21. ಪಿ.952) ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸು ನಡುವೆ ಡಿಕ್ಕಿಯಾಗಿ ಕಾರು ಇಂಜಿನ್ ಸಮೇತ ಪುಡಿಯಾಗಿದೆ. ಚಾಲಕ ಸೇರಿ ಯಾರಿಗೂ ಜೀವಕ್ಕೆ ತೊಂದರೆಯಾಗಿಲ್ಲ. ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿಯಾಗಿರುವದು ಕಂಡುಬಂದಿದೆ. ಈ ಸ್ಥಳ ನಿತ್ಯ ಅಫಘಾತ ಸ್ಥಳವಾಗಿದೆ. ಸ್ಥಳದಲ್ಲಿ ಗುಡ್ಡೆಹೊಸೂರು ಪಂಚಾಯಿತಿ ಮತ್ತು ಕುಶಾಲನಗರ ಠಾಣಾ ವತಿಯಿಂದ ವೇಗ ಮಿತಿಯ ಫಲಕ ಅಳವಡಿಸಲಾಗಿದೆಯಾದರೂ, ಪ್ರತಿನಿತ್ಯ ಅಪಘಾತ ನಡೆಯುತಲಿರುತ್ತದೆ.