ಮಡಿಕೇರಿ, ಜು. 14: ತನ್ನ ಪತಿಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಹೋರಾಟ ನಡೆಸುತ್ತಿರುವವರಿಗೆ ಡಿವೈಎಸ್ಪಿ ಅವರ ಪತ್ನಿ ಪಾವನ ಧನ್ಯವಾದ ಹೇಳಿದ್ದಾರೆ. ಸದನದಲ್ಲಿ ಪ್ರತಿರೋಧದೊಂದಿಗೆ ಆಹೋರಾತ್ರಿ ಧರಣಿ ನಡೆಸುತ್ತಿರುವ ಶಾಸಕರುಗಳು, ಎಲ್ಲರೂ ಒಂದಾಗಿ ಪ್ರತಿಭಟನೆ ಮಾಡಿ ಕೊಡಗು ಬಂದ್ ಆಚರಿಸಿ ಸರಕಾರದ ಗಮನ ಸೆಳೆಯುತ್ತಿರುವ ಎಲ್ಲರಿಗೂ ಧನ್ಯವಾದ ಸಲ್ಲಿಸುವದಾಗಿ ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ.