ವೀರಾಜಪೇಟೆ, ಆ. 13 : ಭಾರತ ದೇಶದ ಸಂಸ್ಕøತಿ ಆಚಾರ- ವಿಚಾರಗಳು ಉತ್ತಮವಾಗಿರುವದ ರಿಂದ ಹೊರದೇಶದವರು ಕೂಡ ನಮ್ಮ ಸಂಸ್ಕøತಿಯನ್ನು ನೋಡಲು ಬರುತ್ತಾರೆ ಅದರಲ್ಲೂ ಕೊಡಗಿನವರ ಸಂಸ್ಕøತಿ ವಿಶೇಷವಾಗಿದ್ದು ಎಂದು ಎರಡನೇ ಹೆಚ್ಚುವರಿ ನ್ಯಾಯಾಧೀಶ ಟಿ.ಎಂ. ನಾಗರಾಜ ಹೇಳಿದರು.

ವೀರಾಜಪೇಟೆ ವಕೀಲರ ಸಂಘದ ವತಿಯಿಂದ ಕಕ್ಕಡ ಸಂತೋಷ ಕೂಟ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಘದ ಸದಸ್ಯರುಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನ್ಯಾಯಾಧೀಶರು ಕೊಡಗಿನ ಪರಿಸರ ಸೌಂದರ್ಯ ನೋಡಿದರೆ ಹೊರ ಜಿಲ್ಲೆ ರಾಜ್ಯದಿಂದ ಬರುವವರ ಮನಸೆಳೆಯುತ್ತಿದೆ ಹಾಗೆ ಕೊಡಗಿನ ಸಂಸ್ಕøತಿ, ಆಚಾರ- ವಿಚಾರಗಳು ಕೆಸರುಗದ್ದೆ ಓಟ ತುಂಬಾ ಮೆಚ್ಚುಗೆ ಪಡುವಂತಹ ಕ್ರೀಡೆಯಾಗಿದ್ದು ಮುಂದೆಯೂ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಮಾತನಾಡಿ ವಕೀಲರ ಸಂಘದ ಸದಸ್ಯರುಗಳು ತಮ್ಮ ವೃತ್ತಿಯೊಂದಿಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವದು ಉತ್ತಮ ಕಾರ್ಯ. ಸಾಧನೆ ಮಾಡಿದವರನ್ನು ಪ್ರೊತ್ಸಾಹಿಸುವದು ಸಂಪ್ರದಾಯ ಮುಂದೆಯೂ ಹೆಚ್ಚಿನ ಸಾಧನೆ ಮಾಡಲು ಸಹಕಾರ ನೀಡಿದಂತಾಗುತ್ತದೆ ಎಂದ ನ್ಯಾಯಾಧೀಶರು ಕೊಡಗಿನ ಸಂಸ್ಕøತಿ ಇಲ್ಲಿನ ಪರಿಸರ ನೋಡುಗರ ಮನಸೆಳೆಯುತ್ತದೆ ಎಂದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾಗಿರುವ ವಕೀಲ ಕೆ.ಎನ್. ವಿಶ್ವನಾಥ್, ಜಿಲ್ಲಾ ಪಂಚಾಯಿತಿ ಸದಸ್ಯ, ವಕೀಲ ಎನ್.ಕಿರಣ್ ಕಾರ್ಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ವಕೀಲ ಎನ್.ಎಸ್. ಪ್ರಶಾಂತ್, ರಾಜ್ಯ ಸರ್ಕಾರದ ನೋಟರಿಯ ವಕೀಲ ಎಂ.ಎಸ್. ವೆಂಕಟೇಶ್, ಭಾರತ ಸರ್ಕಾರದ ನೋಟರಿಯ ಎಂ.ಎಸ್. ಕಾಶಿಯಪ್ಪ, ಅವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ವಿ.ಜಿ.ರಾಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಿವಿಲ್ ನ್ಯಾಯಾಧೀಶÀ ಶರ್ಮಿಳಾ ಕಾಮತ್, ಸಂಘದ ಕಾರ್ಯದರ್ಶಿ ಬಿ.ಎನ್.ಸುಬ್ಬಯ್ಯ ಉಪಸ್ಥಿತರಿದ್ದರು.

ವಕೀಲ ಜಾಯ್ಸಿ ಲವೀನಾ ಕ್ಯಾಸ್ಟಲಿನೋ ಸ್ವಾಗತಿಸಿದರು. ತಾರ ಸುಬ್ಬಯ್ಯ ನಿರೂಪಿಸಿದರೆ. ಬಿ.ಟಿ. ಗೀತಾ ವಂದಿಸಿದರು.