ಮಡಿಕೇರಿ, ಜ. 12: ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣೆ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ತಾ. 9 ರಂದು ಗಾಂಧಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಉಪ ಅಧೀಕ್ಷರ ಛಬ್ಬಿ ಅವರು ಚಾಲನೆ ನೀಡಿದರು. ಈ ಸಂದರ್ಭ ವೃತ್ತನಿರೀಕ್ಷಕ ಮೇದಪ್ಪ, ಸಂಚಾರಿ ಠಾಣಾಧಿಕಾರಿ ವೆಂಕಟರಮಣ ಇನ್ನಿತರರಿದ್ದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ವಾಹನಗಳ ಮೆರವಣಿಗೆ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

ತಾ. 10 ರಂದು ಸಾರಿಗೆ ಸಂಸ್ಥೆ, ಸಂಚಾರಿ ಠಾಣೆ, ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಬಸ್ ನಿಲ್ದಾಣದಲ್ಲಿ ಸುರಕ್ಷಾ ಸಪ್ತಾಹ ಕಾರ್ಯಕ್ರಮ ನಡೆಯಿತು. ಸಾರಿಗೆ ಸಂಸ್ಥೆ ಸಿಬ್ಬಂದಿಗಳು, ನ್ಯಾಯಾಧೀಶರು, ಪೊಲೀಸರು ಪಾಲ್ಗೊಂಡಿದ್ದರು.