ಚೆಟ್ಟಳ್ಳಿ, ಜು. 27: ಚೆಟ್ಟಳ್ಳಿಯ ಸುತ್ತಲೆಲ್ಲ ಆನೆ ಹಾವಳಿ ಹೆಚ್ಚಾಗಿದ್ದು ಜನತೆ ಆನೆಗಳ ನಿರಂತರ ಹಾವಳಿಯಿಂದ ಬೇಸತ್ತಿದ್ದಾರೆ. ಕಾಡಾನೆಗಳು ನಿರಂತರವಾಗಿ ಕಾಫಿ ತೋಟಗಳಿಗೆ ನುಗ್ಗಿ ಕಾಫಿ ಗಿಡಗಳನ್ನೆಲ್ಲಾ ನಾಶಪಡಿಸುತ್ತಿವೆ.

ಈರಳೆ ಹಾಗೂ ಚೇರಳ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿ ಕಂಡು ಬರುತ್ತಿದೆ.

ರಾತ್ರಿಹಗಲೆನ್ನದೆ ಮನೆ, ರಸ್ತೆಯ ಸುತ್ತಲ್ಲೆಲ್ಲ ಆನೆಗಳು ಓಡಾಡುತಿದ್ದು ಜನರು ಮನೆ ಬಿಟ್ಟು ತೆರಳಲು ಹೆದರುವಂತಾಗಿದೆ. ಅರಣ್ಯಾಧಿಕಾರಿಗಳಿಗೆ ನಿತ್ಯವು ಜನರು ದೂರು ಸಲ್ಲಿಸುತ್ತಿದ್ದು, ಆನೆಗಳನ್ನು ಅರಣ್ಯಕ್ಕೆ ಅಟ್ಟಿ ಬಂದರೂ ಪ್ರಯೋಜನವಾಗುತ್ತಿಲ್ಲ ಎಂದು ಊರಿನವರು ದೂರುತ್ತಿದ್ದಾರೆ. ಆನೆಗಳ ಹಾವಳಿಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಗ್ರಾಮಸ್ಥರು ಇಲಾಖೆಯನ್ನು ಒತ್ತಾಯಿಸಿದ್ದಾರೆ.