ಮಡಿಕೇರಿ, ಜೂ. 27: ಕೊಳಗದಾಳು ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಇದೇ ಊರಿನವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವಾಸವಿರುವ ಜಯಪ್ರಕಾಶ್ ಬಿ.ಎನ್. ಅವರು ಬ್ಯಾಗ್ ಮತ್ತು ಊಟದ ತಟ್ಟೆಯನ್ನು ವಿತರಿಸಿದರು. ಈ ಸಂದರ್ಭ ಅವರ ಸಹೋದರ ಜ್ಯೋತಿ ಪ್ರಕಾಶ್ ಬಿ.ಎನ್. ಶಿಕ್ಷಕರಾದ ಪರಿಮಳ ಎಂ.ಎಸ್. ಪುಷ್ಪಾಕುಮಾರಿ ಬಿ., ಶಶಿಕಲ ಎಂ.ಎಸ್. ಉಪಸ್ಥಿತರಿದ್ದರು.