ಸುಂಟಿಕೊಪ್ಪ, ಜೂ. 11: ಇಲ್ಲಿನ ವಿಜಯ ಬ್ಯಾಂಕ್‍ನಲ್ಲಿ ವ್ಯವಸ್ಥಾಪಕರಾಗಿದ್ದ ಸರಸ್ವತಿ ಅವರಿಗೆ ಶ್ರೀ ರಾಮ ಸೇವಾ ಸಮಿತಿ ಹಾಗೂ ಕಾಂಪ್ಲೆಕ್ಸ್ ಮಳಿಗೆದಾರರ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮ ಸೇವಾ ಸಮಿತಿಯ ಉಪಾಧ್ಯಕ್ಷ ಕೆ.ಪಿ.ಜಗನ್ನಾಥ್ ವಹಿಸಿದ್ದರು. ಬ್ಯಾಂಕ್‍ನ ಗ್ರಾಹಕ ಎಂ.ಎ. ವಸಂತ್ ಅಭಿನಂದಿಸಿ ಮಾತನಾಡಿದರು. ವೇದಿಕೆಯಲ್ಲಿ ಬ್ಯಾಂಕ್‍ನ ನೂತನ ವ್ಯವಸ್ಥಾಪಕ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ಕೋದಂಡ ರಾಮ ದೇವಸ್ಥಾನದ ಅರ್ಚಕ ಗಣೇಶ್ ಶರ್ಮಾ ಹಾಗೂ ಕಾಂಪ್ಲೆಕ್ಸ್ ಮಳಿಗೆದಾರರು ಸನ್ಮಾನಿಸಿದರು. ಕಾರ್ಯಕ್ರಮದ ಮೊದಲಿಗೆ ಕುಸುಮ ಪ್ರಾರ್ಥಿಸಿ, ರಾಮ ಸೇವಾ ಸಮಿತಿ ಕಾರ್ಯದರ್ಶಿ ಸುದರ್ಶನ್ ನಾಯ್ಡು ಸ್ವಾಗತಿಸಿ, ಸಹ ಕಾರ್ಯದರ್ಶಿ ವಂದಿಸಿದರು.