ಶನಿವಾರಸಂತೆ, ಜೂ. 9: ಶನಿವಾರಸಂತೆ ಪೊಲೀಸ್ ಠಾಣೆ ಹಾಗೂ ಕೊಡ್ಲಿಪೇಟೆ ಉಪ ಠಾಣೆಯ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಕುಟ್ಟಾ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುವ ಪಿ.ಎಸ್.ಐ. ಎಸ್.ಎಸ್. ರವಿಕಿರಣ್ ಅವರನ್ನು ಠಾಣಾ ಸಿಬ್ಬಂದಿಗಳು ಬೀಳ್ಕೊಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ಡಿ.ವೈ.ಎಸ್.ಪಿ. ಟಿ. ಕುಮಾರ್ ವಹಿಸಿದ್ದರು. ಸಮಾರಂಭದಲ್ಲಿ ವೃತ್ತ ನಿರೀಕ್ಷಕ ಪ್ರದೀಪ್, ಸಹಾಯಕ ಸಬ್‍ಇನ್ಸ್‍ಪೆಕ್ಟರ್‍ಗಳಾದ ಜನಾರ್ಧನ, ಹೆಚ್.ಎಂ. ಗೋವಿಂದ್, ಖತೀಜಾ, ಸಿಬ್ಬಂದಿಗಳಾದ ಪ್ರದೀಪ್ ಕುಮಾರ್, ವಿವೇಕ್, ರಮೇಶ್, ಮಂಜು, ರವೀಂದ್ರ ಮತ್ತಿತರರು ಠಾಣಾಧಿಕಾರಿಯವರೊಂದಿಗಿನ ಒಡನಾಟದ ಕುರಿತು ಮಾತನಾಡಿದರು. 2 ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರವೀಂದ್ರ ಸ್ವಾಗತಿಸಿ, ನಿರೂಪಿಸಿದರು. ರಮೇಶ್ ಪ್ರಾರ್ಥಿಸಿ, ವಂದಿಸಿದರು.