ಶನಿವಾರಸಂತೆ, ಜೂ. 27: ಶನಿವಾರಸಂತೆ ಸಮೀಪದ ಗುಡುಗಳಲೆ ರಸ್ತೆಯಲ್ಲಿ ಸರಕಾರದ ಪರವಾನಿಗೆಯ ನಿಯಮವನ್ನು ಉಲ್ಲಂಘಿಸಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ (ಕೆಎ 19 ಎಎ 9353) ಐಷರ್ ಲಾರಿಯನ್ನು ಡಿವೈಎಸ್‍ಪಿ ಕುಮಾರ್ ಅವರು ತಡೆದು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಅವರ ವಶಕ್ಕೆ ಒಪ್ಪಿಸಲಾಗಿತ್ತು.

ಈ ಬಗ್ಗೆ ಹಿರಿಯ ಭೂ ವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡಿದ ಮಾಹಿತಿಯ ಮೇರೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಅವರು ಲಾರಿಯ ಚಾಲಕ ಮತ್ತು ಮಾಲೀಕ ಮಹಮ್ಮದ್ ಇಸ್‍ಹಾಕ್ ಬಂಟ್ವಾಳ ಅವರಿಗೆ ರೂ. 15 ಸಾವಿರ ದಂಡ ವಿಧಿಸಿದ್ದಾರೆ.