ಸುಂಟಿಕೊಪ್ಪ, ಆ. 16: ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ ‘ವಂದೆ ಮಾತರಂ’ ಅಭಿಯಾನ ರಥ ಇಂದು ಮಧ್ಯಾಹ್ನ ಸುಂಟಿಕೊಪ್ಪಕ್ಕೆ ಆಗಮಿಸಿತು. ಈ ಸಂದರ್ಭ ನಗರ ಬಿಜೆಪಿ ಮತ್ತು ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಆತ್ಮೀಯವಾಗಿ ಬರಮಾಡಿ ಕೊಳ್ಳಲಾಯಿತು.

ಇಲ್ಲಿನ ಕನ್ನಡ ವೃತ್ತದ ಬಳಿ ರಥ ಆಗಮಿಸಿದ ಸಂದರ್ಭ ಸಾರ್ವಜನಿಕರು ವಂದೇ ಮಾತರಂ, ಭಾರತ್ ಮಾತಾಕೀ ಜೈ ಘೋಷಣೆಯನ್ನು ಕೂಗಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬೀಳ್ಕೊಡಲಾಯಿತು.

ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಮಾಜಿ ನಗರಾಧ್ಯಕ್ಷ ಬಿ.ಕೆ. ಮೋಹನ್, ಉಪಾಧ್ಯಕ್ಷರಾದ ಅನಿಲ್ ಕುಮಾರ್, ಜಿ. ರಾಜನ್, ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಚೆಟ್ಟಳ್ಳಿ ಬಿಜೆಪಿ ನಗರಾಧ್ಯಕ್ಷ ಕಂಠಿ ಕಾರ್ಯಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಸದಸ್ಯರಾದ ಸಿ.ಸಿ. ಚಂದ್ರ, ಕರವೇ ನಗರಾಧ್ಯಕ್ಷ ನಾಗೇಶ್ ಪೂಜಾರಿ, ಬಿಜೆಪಿ ಸದಸ್ಯರಾದ ಓಡಿಯಪ್ಪನ ಸುದೇಶ್, ಪಿ.ಕೆ. ಅನಿಲ್ ಕುಮಾರ್, ಅಶೋಕ್, ಮುನಿಯಪ್ಪ ಮುಂತಾದವರು ಇದ್ದರು.