ಮಡಿಕೇರಿ, ಡಿ. 24: ಇತ್ತೀಚೆಗೆ ಇಂಟರ್ ನ್ಯಾಷನಲ್ ಶೋಟ್ ಕೇನ್ ಕರಾಟೆ ಅಸೋಸಿಯೇಷನ್ ಮತ್ತು ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಮೈಸೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ನಾಪೋಕ್ಲು ಬೇತು ಸೇಕ್ರೆಡ್ ಹಾರ್ಟ್ ಶಾಲೆಯ ದಿಲನ್ ತಿಮ್ಮಯ್ಯ ಮತ್ತು ಧೀರಜ್ ಕರಿಯಪ್ಪ, ಜಿ.ಎಂ.ಪಿ. ಶಾಲೆಯ ಎಂ. ಚೇತಕ್, ಚೇರಂಬಾಣೆಯ ಅರುಣ ಜೂನಿಯರ್ ಕಾಲೇಜಿನ ಎಂ.ಎನ್. ಪವನ್ ಮತ್ತು ಕಾರುಗುಂದ ಕೇಟೋಳಿ ಕೌಶಿಕ್ ಕಟಾ ಮತ್ತು ಕುಮಟೆ ವಿಭಾಗದಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ಟ್ರೋಫಿ ಪಡೆದಿದ್ದಾರೆ. ಇವರುಗಳು ಕರಾಟೆ ತರಬೇತುದಾರ ಸೆನ್ಸಾಯ್ ನಾಗೇಂದ್ರಪ್ಪ ಬೆಟ್ಟಗೇರಿ ಇವರಿಂದ ತರಬೇತಿ ಪಡೆದಿರುತ್ತಾರೆ.